ನಮ್ಮೂರ ಹೋಳಿ ಹಾಡು – ೮

ರತಿ ದೇವಿ ಕಾಂತನ ನೆನಸಿ
ಅಳುತ ಬಿಡುವಳು ಬಾಯ |
ನೀ ಬಿಡುವುದೇ ಕೈಯಾ ||ಪ||

ಸುರರೆಲ್ಲರು ಕಲೆತು ನಿನಗೆ
ಮಾಡಿದರಲ್ಲೋ ಅಪಜಯ
ಎನ್ನ ಮೋಹದ ರಾಯ ||೧||

ತಾರಕರ ಬಾಧೆಗೆ ತಾಳದೆ
ಮಾಡಿದರುಪಾಯ?
ದೇವತಾ ಗುರುರಾಯ ||೨||

ನನಗೆ ನಿನಗೆ ಕಂಕಣ ಕಟ್ಟಿ
ಮಾಡಿ ಮದುವೆಯಾ
ಎರೆದಾರೋ ಧಾರೆಯಾ? ||೩||

ಮರೆ-ಮೋಸ ಮಾಡಿ
ನಿನ್ನ ಪ್ರಾಣ ಕಳೆದರೋ ಪ್ರಿಯಾ?
ಹೇ ಚೆನ್ನಿಗರಾಯ ||೪||

ಹರಿದಿತ್ತು ಕನಸಿನೊಳಗೆ
ಕರಿಮಣಿಯು ತಾಳಿಯಾ!
ಮುರಿದಿತ್ತು ಮೂಗುತಿಯಾ ||೫||

ನಾ ಕನಸ ಕಂಡೆ ನಿದ್ರೆಯೊಳಗೆ
ನಿನ್ನಯ ತಲೆಯಾ!
ಯಮದೂತರ ಕೈಯಾ ||೬||

ತಲೆ ಇದ್ದಿಲ್ಲ? ನಾ ಕಂಡೆ!!
ಬರೀ ಡಿಂಬದ ಬಾಯಾ!
ಇದೆಂಥ ಆಶ್ಚರ್ಯ ||೭||

ಮೆರೆಸಿದ್ದರು ನಿನ್ನಾನೆಯ ಮೇಲೆ
ಬೀದಿಯಲಾ ಕೊರಳಿಗೆ
ಹೂವಿನ ಮಾಲೆಯಾ ||೮||

ಸಿರಿ ಸೆಟ್ಟಿ ಮಾಡಿದಂಥ
ಪದದ ಗಗರಿಯಾ
ಜಂಭಕಿಕ್ಕಿದ್ದು ಸರಿಯಾ? ||೯||

ಶಾಸನವನೆ ಬರೆದು ಬಿಟ್ಟನು
ಅವ ಕೊಂಡು ಉಕ್ಕಿನ ಮಳೆಯಾ ?
ಹೋ ಮನ್ಮಥರಾಯ ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ನಾಡ ಕಟ್ಟುವ ಕಲಿಗಳು
Next post ಪಂಪ್ಕಿನ್ ಗಾಡಿ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys